ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ, ಯಕ್ಷಗಾನ ಪ್ರದರ್ಶನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 4 , 2013
|
ಡಿಸೆ೦ಬರ್ 4, 2013
|
ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ, ಯಕ್ಷಗಾನ ಪ್ರದರ್ಶನ
ಮುಂಬಯಿ :
ಯಕ್ಷಗಾನ ಪ್ರಸಂಗಕರ್ತರಿಗೆ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಕತೆಗಳ ಆಳವಾದ ಅಧ್ಯಯನಬೇಕು. ಅದನ್ನು ಪ್ರದರ್ಶನಕ್ಕೆ ಅನುಗುಣವಾಗಿ ಪ್ರಸಂಗವನ್ನು ರಚಿಸಿ ಪ್ರೇಕ್ಷಕರನ್ನು ಆಕರ್ಷಿಸುವ ವಿಶೇಷತೆ ಯಕ್ಷಗಾನ ಸಾಹಿತಿಯಲ್ಲಿರಬೇಕು. ತಾಳಬದ್ಧವಾಗಿ, ಛಂದಸ್ಸುಮುಕ್ತವಾಗಿರುವ ಯಕ್ಷಗಾನ ಅನೇಕ ಕಲೆಗಳನ್ನು ಸಮಾವೇಶಗೊಂಡ ಕಲಾಸಂಗಮವಾಗಿದೆ ಎಂದು ನಗರದ ಹಿರಿಯ ಸಾಹಿತಿ ಬಿ. ಎಸ್. ಕುರ್ಕಾಲ್ ಅವರು ಅಭಿಪ್ರಾಯಿಸಿದರು.
|
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ವೈದ್ಯ ಎಂ. ಎಸ್. ಆಳ್ವ ಅವರು ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿದರು.
|
ಡಿ. 1 ರಂದು ಫಲಿಮಾರು ಮಠ ಮೀರಾರೋಡ್ ಶಾಖೆಯಲ್ಲಿ ಯಕ್ಷಗಾನ ಪ್ರಸಂಗಕರ್ತ ಎಂ. ಟಿ. ಪೂಜಾರಿ ಅವರ ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ರಂಗಕ್ಕೆ ಸಾರ್ಥಕ ಸೇವೆ ಸಲ್ಲಿಸಿದ ಎಂ. ಟಿ. ಪೂಜಾರಿ ಅವರು ಒಟ್ಟು 24 ತುಳು-ಕನ್ನಡ ಪ್ರಸಂಗವನ್ನು ರಚಿಸಿ ಮುಂಬಯಿ ನಗರದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಅವರ ಪ್ರಕಟಗೊಳ್ಳದ ಕೃತಿಗಳನ್ನು ಮುದ್ರಣಗೊಳ್ಳುವಂತೆ ಕಲಾಪ್ರಿಯ, ಕಲಾಪೋಷಕರು, ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಪ್ರಸಂಗಗಳು ಅನುಕರಣೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಗೊಳಿಸಿದ ಪ್ರಸಿದ್ಧ ವೈದ್ಯ ಎಂ. ಎಸ್. ಆಳ್ವ ಅವರು ಮಾತನಾಡಿ, ಜಾತಿ, ಮತ, ಭೇದವಿಲ್ಲದೆ ಎಲ್ಲರಿಂದಲೂ ಮುಟ್ಟಿಸಿಕೊಳ್ಳುವ ದೇವರು ಪಂಢರಾಪುರದ ವಿಠಲನೊಬ್ಬನೆ. ಆಷಾಢ ಏಕಾದಶಿಯಂದು ಇಲ್ಲಿ ಸುಮಾರು 15 ರಿಂದ 20 ಲಕ್ಷ ಸೇರಿ ಭಗವಂತನನ್ನು ಭಜನೆಯ ಮೂಲಕ ಪೂಜಿಸುತ್ತಾರೆ. ಕರ್ನಾಟಕ ಲೇಖಕ ಮಹಾರಾಷ್ಟ್ರದ ಪವಿತ್ರ ಕ್ಷೇತ್ರದ ಬಗ್ಗೆ ಬರೆದು ಯಕ್ಷಗಾನ, ಬಯಲಾಟದ ಮೂಲಕ ಪ್ರದರ್ಶನಗೊಳಿಸುವುದು ನಿಜಕ್ಕೂ ಶ್ಲಾಘನೀಯ. ಅವರ ಪಂಢರಾಪುರ ಕ್ಷೇತ್ರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ಪ್ರಸಂಗ ಸದಾ ಪ್ರದರ್ಶನಗೊಳ್ಳುತ್ತಿರಲಿ ಎಂದು ಶುಭ ಹಾರೈಸಿದರು.
ಫಲಿಮಾರು ಮಠದ ಪ್ರಧಾನ ಅರ್ಚಕ ವಿದ್ವಾನ್ ರಮಣ ಆಚಾರ್ಯ, ಸಂಘಟಕ ಜಿ. ಟಿ. ಆಚಾರ್ಯ, ಕರ್ನೂರು ಶಂಕರ ಆಳ್ವ, ಭಾಗವತ ಪೊಲ್ಯ ಲಕ್ಷಿ¾àನಾರಾಯಣ ಶೆಟ್ಟಿ, ಕೃತಿಕಾರ ಎಂ. ಟಿ. ಪೂಜಾರಿ ಅವರು ಸಂದಭೋìಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಲಾಪೋಷಕ ಸಂಜೀವ ಶೆಟ್ಟಿ ಅವರು ಉಪಸ್ಥಿತರಿದ್ದರು.
ಗುಣಕಾಂತ ಕರ್ಜೆ, ಚಿತ್ರಾಪು ಕೆ. ಎಂ. ಕೋಟ್ಯಾನ್, ದಿನೇಶ್ ಶೆಟ್ಟಿ, ಸದಾಶಿವ ವಾಲ್ಪಾಡಿ, ಜಯಕರ ಶೆಟ್ಟಿ ಅವರು ಗಣ್ಯರನ್ನು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಂಗಕರ್ತ ಎಂ. ಟಿ. ಪೂಜಾರಿ ಅವರ ನೂತನ ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನವು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪ್ರದರ್ಶನಗೊಂಡಿತು. ಎರ್ಮಾಳ್ ಅರುಣ್ ಕುಮಾರ್ ಶೆಟ್ಟಿ ಅವರು ಕಾರ್ಯಯಕ್ರಮ ನಿರೂಪಿಸಿ ವಂದಿಸಿದರು.
ಕೃಪೆ :
http://www.kannada.yahoo.com
|
|
|